ಶ್ರೀ ಶುಭಂಷ್ ಸಿನಿಕ್ರಿಯೇಷನ್ಸ್ ಸಂಸ್ಥೆಯಲ್ಲಿ ಸ್ನೇಹಿತರ ಬಳಗ ನಿರ್ಮಿಸುತ್ತಿರುವ ನಂ ಮುತ್ತು ಚಿತ್ರಕ್ಕಾಗಿ ನಾಯಕ ಶಿವರಾಜ್ ಹಾಗೂ ಆತನ ತಂದೆ ತಾಯಿ ನಾಯಕಿ ಅರ್ಚನಾ ಸಿಂಗ್ ಮನೆಗೆ ಹೆಣ್ಣು ಕೇಳಲು ಬರುತ್ತಾರೆ. ತಾನು ಪ್ರೀತಿಸಿದ ಹುಡುಗಿಯನ್ನು ವರಿಸಲೆಂದು ನಾಯಕ ತನ್ನ ಪೋಷಕರನ್ನು ಒಪ್ಪಿಸಿ ಕರೆದುಕೊಂಡು ಬರುವ ಈ ದೃಶ್ಯವನ್ನು ನಗರದ ಗಂಧರ್ವ ಗಿರಿ ಹೌಸ್ನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಇದರೊಂದಿಗೆ ಚಿತ್ರದ ಶೇ.೮೦ ರಷ್ಷು ಚಿತ್ರೀಕರಣ ಮುಗಿದಿದ್ದು ೬ ಹಾಡು ಹಾಗೂ ೨ ಸಾಹಸ ದೃಶ್ಯಗಳ ಶೂಟಿಂಗ್ ಬಾಕಿ ಇದೆ.
ವಿ.ರವಿಚಂದ್ರ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮೋಹನ್ ಛಾಯಾಗ್ರಹಣ ಲೋಕಿ ಸಂಗೀತ ಮತ್ತು ಸಾಹಿತ್ಯ, ನವೀನ್.ಆರ್. ಸಂಕಲನ, ಶಿವರಾಜ್ ಕಥೆ, ರಾಜು ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಸಾಹಸವಿದೆ. ಸುಭಾಷ್ಶೆಟ್ಟಿ, ಶಿವು, ರಕ್ಷ, ಅರ್ಚನಾಸಿಂಗ್, ಗಿರಿಜಾಲೋಕೇಶ್, ಹರೀಶ್ ರೈ, ಮಲ್ಲೇಶ್, ಜಯರಾಂ, ನಯನಕೃಷ್ಣ, ಬಿ.ಟಿ.ನಾಗರಾಜ್, ಚಿಕ್ಕಹೆಜ್ಜಾಜಿಮಾದೇವ್, ಅಪೂರ್ವ, ಮನ್ದೀಪ್ರೈ, ವಿಶಾಲ್ಕಾರ್ತಿಕ್, ಯತೀಶ್, ಹರ್ಷ, ಮಂಜು ಮನು ಮುಂತಾದವರಿದ್ದಾರೆ.